Tuesday 26 August 2014

PTA meeting



ದಿನಾಂಕ 26-8-2014 ನೇ ಮಂಗಳವಾರ ನಮ್ಮ ಶಾಲೆಯಲ್ಲಿ  ಪಿ.ಟಿ.ಎ ಸಭೆ ನಡೆಯಿತು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಅವರು ಎಲ್ಲರಿಗೂ ಸ್ವಾಗತ ಕೋರಿದರು.ಸಭೆಯಲ್ಲಿ  5-9-2014 ಶುಕ್ರವಾರ ಓಣಂ ಹಬ್ಬದ ಆಚರಣೆಯನ್ನು ಎಲ್ಲರು ಸೇರಿ ಆಚರಿಸುವುದಾಗಿ ತೀರ್ಮಾನಿಸಲಾಯಿತು.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸವಿತಾ ಅವರು ನಮ್ಮ ಶಾಲಾ ಎರಡನೇ ಹಸ್ತ ಪತ್ರಿಕೆಯಾದ ಆರೋಗ್ಯವೇ ಭಾಗ್ಯವನ್ನು ಬಿಡುಗಡೆಗೊಳಿಸಿದರು.ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಅವರು ಶುಭ ಹಾರೈಸಿ, ಶ್ರೀ ಪುಷ್ಪರಾಜ್ ಅವರು ಧನ್ಯವಾದ ಹೇಳಿದರು

Sunday 24 August 2014

ಚಿಣ್ಣರ ಹಸ್ತದಿಂದ





   ಗಿಳಿ

ಗಿಳಿಯೇ ಗಿಳಿಯೇ ನೀ ಕೆಳಗಿಳಿಯೇ
ಮಾವಿನಮರದಿಂದ
                    ಇಳಿಯೆನು ಇಳಿಯೆನು ನಾ ಕೆಳಗಿಳಿಯೆನು
                   ಮಾವಿನಮರದಿಂದ
ತಿಂಡಿಯ ಕೊಡುವೆ ತಿನಸನು ಕೊಡುವೆ
ಬಾ ಗಿಳಿ ಹತ್ತಿರಕೆ
                     ಬಾರೆನು ನಾನು ಬಾರೆನು ನಾನು
                    ಬಂಧಿಸುವೆ ನೀ ನನಗೆ
ಬಂಧಿಸಲಾರೆ ಬಂಧಿಸಲಾರೆ
ಸ್ವತಂತ್ರವಾಗಿರು ನೀ ಗಿಣಿಯೇ
                      ಗಿಳಿಯೇ ಗಿಳಿಯೇ ನೀ ಕೆಳಗಿಳಿಯೇ
                      ಮಾವಿನಮರದಿಂದ 
                                                                                  ನವ್ಯ ಕೆ
                                                                                   IV ನೇ ತರಗತಿ


Sunday 17 August 2014

ಸಮವಸ್ತ್ರ ವಿತರಣೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸವಿತ ಅವರು ನೆರವೇರಿಸಿದರು



ಸ್ವಾತಂತ್ರ್ಯ ದಿನಾಚರಣೆ- ಸಭಾ ಕಾರ್ಯಕ್ರಮ (Independence day celebration)


ಸಭೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಬಿಂದು ಅವರು ಉದ್ಘಾಟಿಸಿ ಮಾತನಾಡಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸವಿತ ಅವರು ಅಧ್ಯಕ್ಷತೆಯನ್ನು ವಹಿಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಫರ್ಧೆಗಳ ಬಹುಮಾನವನ್ನು ಬಿಂದು ಅವರು

ವಿತರಿಸಿದರು
ನಮ್ಮ ಶಾಲಾ ಸ್ವಾತಂತ್ರ್ಯ ದಿನಾಚರಣೆ- ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸವಿತ ಅವರು ಧ್ವಜಾರೋಹಣಗೈದರು

Wednesday 6 August 2014

OUR SCHOOL MAGAZINE KALARAVA


ಸಾಕ್ಷರದ ಉದ್ಘಾಟನೆ ಮತ್ತು ಮಾಸಿಕ ಬಿಡುಗಡೆ

 ಇಂದು ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ಸಾಕ್ಷರದ ಉದ್ಘಾಟನೆಯನ್ನು ಕಾರಡ್ಕ ಪಂಚಾಯತ್ ಸದಸ್ಯೆ ಶ್ರೀಮತಿ ಬಿಂದು ಅವರು ಔಪಚಾರಿಕವಾಗಿ ನೆರವೇರಿಸಿದರು.ಈ ಶುಭ ವೇಳೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸವಿತಾ ಅವರು ನಮ್ಮ ಶಾಲಾ ಮಾಸಿಕದ ಬಿಡುಗಡೆಯನ್ನು ಮಾಡಿದರು.


Saturday 2 August 2014

SCHOOL TRIP TO MANGLORE

 ನೆನಪಿನ ಆಳದಿಂದ ,,,,,,,ನಮ್ಮ ಶಾಲಾ ಪ್ರವಾಸ